Monday, January 31, 2011

ಬೇಂದ್ರೆ ಕಾವ್ಯೋತ್ಸವ

ಮಾರ್ಚ್ 20, 2011ರಂದು ಬೋಧಿ ಟ್ರಸ್ಟ್ ವತಿಯಿಂದ ಬೆಂಗಳೂರಿನ ಇಂಡಿಯನ್ ಇನ್ಸ್ಸಿಟ್ಯೂಟ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಬೇಂದ್ರೆ ಕಾವ್ಯೋತ್ಸವ ಮತ್ತು ಇತ್ತೀಚೆಗೆ ಬೋಧಿ ಟ್ರಸ್ಟ್ ಪ್ರಕಟಿಸಿದ ಕೆಲವು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಲಿದೆ. ಸರ್ವಶ್ರೀ ಸಿ. ಆರ್. ಸಿಂಹ, ಶ್ರೀನಿವಾಸ ಪ್ರಭು, ರಘುನಂದನ, ಎನ್.ಮಂಗಳಾ, ನರಹಳ್ಳಿ ಬಾಲಸುಬ್ರಹ್ಮಣ್ಯ,  ಮತ್ತು ಕಲ್ಪನಾ ನಾಗನಾಥ್ ಬೇಂದ್ರೆಯವರ ವಿವಿಧ ಕವನಗಳನ್ನು ಸುಮಾರು ಎರಡು ಗಂಟೆಗಳ ಕಾಲ ವಾಚಿಸುವರು/ಹಾಡುವರು. ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಕವಿ ಎಚ್. ಎಸ್. ವೆಂಕಟೇಶಮೂರ್ತಿ ವಹಿಸುತ್ತಾರೆ. ನರಹಳ್ಳಿ ಬಾಲಸುಬ್ರಹ್ಮಣ್ಯ ಪುಸ್ತಕಗಳ ಕುರಿತು ಮಾತಾಡುತ್ತಾರೆ. ಸಮಾರಂಭ ಬೆಳಿಗ್ಗೆ 9.30ಕ್ಕೆ ಸುರುವಾಗಿ ಮಧ್ಯಾಹ್ನ 1 ಗಂಟೆಗೆ ಮುಗಿಯಲಿದೆ.

ಬೋಧಿ ಟ್ರಸ್ಟ್ ಪ್ರಾರಂಭವಾಗಿ ಹತ್ತು ವರ್ಷ ಪೂರ್ತಿಯಾಯಿತು. ಅದನ್ನು ಸಂಭ್ರಮಿಸಿಕೊಳ್ಳಲು ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ಇದು ಮೊದಲನೆಯದು.

ಕಾರ್ಯಕ್ರಮಕ್ಕೆ ಬನ್ನಿ. ಕಾವ್ಯಪ್ರೇಮಿಗಳಿಗೆ ತಿಳಿಸಿ, ಕರಕೊಂಡು ಬನ್ನಿ.

No comments:

Post a Comment