Monday, June 18, 2012

ಕುದುರೆ ಬಂತು ಕುದುರೆ ಫೊಟೋಗಳು

ಇವು ಎರಡು ವರ್ಷಗಳ ಕೆಳಗೆ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನ ಕಾರ್ಮಿಕರ ನಾಟಕ ತಂಡ ಸ್ನೇಹರಂಗ ಆಡಿದ ನನ್ನ ನಾಟಕ ಕುದುರೆ ಬಂತು ಕುದುರೆಯ ದೃಶ್ಯಗಳು. ನಾಟಕ ನಿರ್ದೇಶಿಸಿದವರು ಎನ್. ಮಂಗಳಾ. ಫೊಟೋ ತೆಗೆದವರು ಟಿ. ಆರ್. ಚಂದ್ರಶೇಖರ ಶೆಟ್ಟಿ.

ನನಗೆ ಇದು ಇಷ್ಟವಾದ ಪ್ರಯೋಗ. ಆ ನಾಟಕದಲ್ಲಿ ಮೂರು ನಾಟಕಗಳಿವೆ. ಪ್ರೇಕ್ಷಕರ ಎದುರು ರಂಗದ ಮೇಲೆ ನಡೆಯುವ ನಾಟಕ ಒಂದು; ರಂಗದ ಹೊರಗೆ ಗುಡ್ಡದ ಮೇಲೆ ನಡೆಯುತ್ತಿರುವ ಶೂಟಿಂಗ್ ನಾಟಕ ಇನ್ನೊಂದು; ಪಾತ್ರಗಳ ಜೀವನದಲ್ಲಿ ಹಿಂದೆ ಆಗಿಹೋದ ಮತ್ತು ಮುಂದೆ ಆಗಬಹುದಾದ ನಾಟಕ ಮತ್ತೊಂದು. ಮಂಗಳಾರ ಪ್ರಯೋಗ ಆ ಮೂರು ನಾಟಕಗಳನ್ನು ಏಕತ್ರದಲ್ಲಿ ಸಂಧಿಸಿ ತೋರಿಸಿತ್ತು. ನನಗೆ ಆ ನಾಟಕ ನೋಡಿದ ಮೇಲೆ ಇಂಥಾ ಪ್ರತಿಭಾವಂತ ನಿರ್ದೇಶಕರು ನನ್ನ ನಾಟಕ ತೆಗೆದುಕೊಳ್ಳುತ್ತಾರೆ ಎಂದಾದರೆ ಇಂಥಾ ನಾಟಕ ಇನ್ನೂ ಬರೆಯಬೇಕು ಅನ್ನಿಸಿತು.

No comments:

Post a Comment