Tuesday, June 12, 2012

ನಾಗರಾಜ ರಾವ್ ಜವಳಿ

ನಾಗರಾಜ ರಾವ್ ಜವಳಿ ನನ್ನ ಬ್ಲಾಗಿನ ಫೊಲೊಯರ್ ಆಗಿದ್ದವರು. ನನಗೆ ಅವರು ತೀರ್ಥಹಳ್ಳಿಯವರು, ಸಾಹಿತ್ಯ-ಸಂಸ್ಕೃತಿಗಳಲ್ಲಿ ಗಂಭೀರ ಆಸಕ್ತಿ ಉಳ್ಳವರು ಎಂದು ಮಾತ್ರ ಗೊತ್ತಿತ್ತು. ಆದರೆ ನಿನ್ನೆ ಅವರ ಅಕ್ಕ ಶ್ರೀಮತಿ ಸರಸ್ವತಿ ಪ್ರಭು ಮಾತಾಡುತ್ತಾ ಅವರು ಕಳೆದ ವರ್ಷ ನವೆಂಬರಿನಲ್ಲಿ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಿದರು. ನಿನ್ನೆ ಸರಸ್ವತಿ ಪ್ರಭು ತಿಳಿಸಿದ ಮೇಲೇ ಅವರು ಅಕ್ಕ-ತಮ್ಮ ಎಂದೂ ನನಗೆ ಗೊತ್ತಾದದ್ದು. ಸರಸ್ವತಿ ಪ್ರಭು ನನ್ನ ನಾಟಕ ಕುದುರೆ ಬಂತು ಕುದುರೆಯನ್ನು ಹಿಂದಿಗೆ ಅನುವಾದಿಸಿದ್ದರು. ಹೀಗಾಗಿ ಅವರು ನನಗೆ ಹೆಚ್ಚು ಪರಿಚಯ. ಆ ಅನುವಾದ ಬಿ. ವಿ ಕಾರಂತರೂ ಸೇರಿದಂತೆ ಅನೇಕ ಹಿಂದಿ ಸಾಹಿತ್ಯ ಬಲ್ಲವರ ಮೆಚ್ಚುಗೆಗೆ ಪಾತ್ರವಾಗಿತ್ತು.

ತಡವಾಗಿಯಾದರೂ, ನಾಗರಾಜ ಜವಳಿ ಅವರಿಗೆ ಈ ಮೂಲಕ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ. ಆ ನೋವು ಸಹಿಸುವ ಶಕ್ತಿ ಅವರ ಅಕ್ಕ ಸರಸ್ವತಿ ಪ್ರಭು ಸೇರಿದಂತೆ ಅವರ ಕುಟುಂಬದ ಮತ್ತು ಅವರನ್ನು ಬಲ್ಲ ಎಲ್ಲರಿಗೆ ಸಿಕ್ಕಲಿ ಎಂದು ಬಯಸುತ್ತೇನೆ.

No comments:

Post a Comment