Wednesday, February 22, 2012

ಬೆಳ್ಳೆ ರಾಮಚಂದ್ರ ರಾಯರು

ಪುತ್ತೂರಿನ ಕುರಿತು ಬರೆದ "ಕಿರು ಹಣತೆಗಳು" ಎಂಬ ಲೇಖನದಲ್ಲಿ ನನಗೆ ಪುತ್ತೂರಿನಲ್ಲಿ ವಾಸಿಸಿದ್ದ ಒಬ್ಬ ಮುಖ್ಯ ವ್ಯಕ್ತಿಯ ಹೆಸರು ಉಲ್ಲೇಖಿಸಲು ಬಿಟ್ಟು ಹೋಗಿದೆ. ಅವರೇ ಬೆಳ್ಳೆ ರಾಮಚಂದ್ರ ರಾಯರು. ಕೋರ್ಟು ರಸ್ತೆಯಲ್ಲಿ ಹಿಂದೆ  ಪಬ್ಲಿಕ್ ಲೈಬ್ರೆರಿ ಇದ್ದ ಕಟ್ಟಡದ ಪಕ್ಕದ ಕಟ್ಟಡದಲ್ಲಿ ಅವರ ಕಛೇರಿ ಇತ್ತು. ಅವರು ವೃತ್ತಿಯಲ್ಲಿ ವಕೀಲರು. ಆದರೆ ಇಂಗ್ಲಿಷ್ ಅಧ್ಯಾಪಕರಾಗಬೇಕೆಂಬ ಆಸೆ ಇದ್ದವರು. ವಿವೇಕಾನಂದ ಕಾಲೇಜು ಸುರುವಾದಾಗ ಅದರ ಪ್ರಾರಂಭದ ದಿನಗಳಲ್ಲಿ ಅವರು ಅಲ್ಲಿ ಇಂಗ್ಲಿಷ್ ಪಾಠ ಮಾಡಿದ್ದರು. ಈ ಸಲದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸ್ವಪ್ನ ಸಾರಸ್ವತದ ಲೇಖಕ ಗೋಪಾಲಕೃಷ್ಣ ಪೈ ಅಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ರಾಮಚಂದ್ರ ರಾಯರು ಅವರಿಗೆ ಇಂಗ್ಲಿಷ್ ಪಾಠ ಮಾಡಿದ್ದರಂತೆ.

ಅವರ ಚಿರವಿರಹಿ ಒಳ್ಳೆಯ ಕಾದಂಬರಿ. ಅದು ಮತ್ತು ಅವರ ಇತರ ಬರೆಹ ಸೇರಿ ಇತ್ತೀಚೆಗೆ ಪುನರ್ಮುದ್ರಣವಾಗಿದೆ. ಅವರು ಶೇಕ್ ಸ್ಪಿಯರಿನ ಮೊದಲ ನಾಟಕಗಳಲ್ಲೊಂದಾದ Two Gentlemen of Veronaವನ್ನು ಕನ್ನಡಕ್ಕೆ ತಂದಿದ್ದಾರೆ. ಹರಿಹರಪ್ರಿಯ ಅದನ್ನು ಪತ್ತೆ ಮಾಡಿ ತಮ್ಮ ಪತ್ರಿಕೆ ಪ್ರಜಾಸಾಹಿತ್ಯದಲ್ಲಿ ಅದರ ಬಗ್ಗೆ ಬರೆದಿದ್ದರು.

No comments:

Post a Comment