Friday, January 20, 2012

ಬೇರೆ ಬೇರೆ ಕಾರಣಗಳಿಂದಾಗಿ ನನಗೆ ಇತ್ತೀಚೆಗೆ ಸರಿಯಾಗಿ ಬ್ಲಾಗ್ ಪ್ರಕಟಿಸಲು ಆಗಲಿಲ್ಲ. ಕೆಲವು ದಿವಸ ಇಂಟರ್ನೆಟ್ ಹಾಳಾಗಿತ್ತು. ಆ ಮೇಲೆ ಡಿಸೆಂಬರಿನಿಂದ ಜನವರಿ ಹದಿನೈದರ ವರೆಗೂ ಹೆಚ್ಚಿನ ದಿನ ನನ್ನ ನಾಟಕಗಳನ್ನು ಇಂಗ್ಲಿಷಿಗೆ ಅನುವಾದಿಸುವುದರಲ್ಲಿ ಕಳೆದೆ. ರಥಮುಸಲ ಮತ್ತು ಕುದುರೆ ಬಂತು ಕುದುರೆಗಳನ್ನು ಹಿಂದೆಯೇ ಅನುವಾದಿಸಿ ಇಟ್ಟಿದ್ದೆ. ಎಷ್ಟು ಹಿಂದೆ ಎಂದರೆ ಕೈಬರೆಹದಲ್ಲಿ ಅನುವಾದಿಸಿದ್ದ ಅದರ ಹಾಳೆಗಳೆ ಹಳದಿಗೆ ತಿರುಗಿದ್ದವು. ಅವನ್ನು ತಿದ್ದಿ ಕಂಪ್ಯೂಟರಿನಲ್ಲಿ ಮತ್ತೆ ಟೈಪು ಮಾಡಿ ಮತ್ತೆ ತಿದ್ದಿದೆ. ಜೊತೆಗೆ ಹುಲಿಯ ಕಥೆ ಹಾಗೂ ರಾಹು ಮತ್ತು ಕೇತುಗಳನ್ನು ಅನುವಾದಿಸಿದೆ. ಇನ್ನೂ ಏಳು ನಾಟಕಗಳು ಅನುವಾದ ಆಗಬೇಕಾದ್ದಿದೆ. ಅವುಗಳಲ್ಲಿ ಡಾಗ್ ಶೋ ಮತ್ತು ಜರಾಸಂಧ ಕನ್ನಡ ಭಾಷೆಯ ನಾಟಕಗಳು. ಕನ್ನಡ ಬಾಷೆಯ ಲಯವಲ್ಲದೆ ಇಂಗ್ಲಿಷಿನಲ್ಲಿ ಅವನ್ನು ಬರೆಯಬಲ್ಲೆ ಅನ್ನಿಸುವುದಿಲ್ಲ. ಉಳಿದ ಐದು ನಾಟಕಗಳನ್ನು ಹೀಗೇ ಒಂದೆರಡು ತಿಂಗಳು ಕೂತು ಅನುವಾದಿಸಬೇಕು. ಈ ನಾಟಕಗಳ ಅನುವಾದವೂ ಡಿಸೆಂಬರಿನೊಳಗೆ ಮುಗಿಯಬಹುದು ಅಂದುಕೊಂಡಿದ್ದರೆ ಮುಗಿಯದೆ ನಲುವತ್ತೈದು ದಿನ ಹಿಡಿಯಿತು. ಆದರೆ ಬೇರೆಯೆವರು ಅನುವಾದಿಸುವುದಕ್ಕಿಂತ ನಮ್ಮ ಕೃತಿಗಳನ್ನು ನಾವೇ ಅನುವಾದಿಸುವುದು ಒಳ್ಳೆಯದೆಂದು ನನ್ನ ಅಭಿಪ್ರಾಯ.

ಜೊತೆಗೆ ನನ್ನ ಸಮಗ್ರ ಕಥೆಗಳು--1 ಮುದ್ರಣದ ವ್ಯವಸ್ಥೆ ಮಾಡಬೇಕಿತ್ತು. ಅದು ಈಗ ಮುದ್ರಣವಾಗಿ ಬಂದಿದೆ. ಬೇಕಾದವರು ಆನ್ ಲೈನ್ ಮೂಲಕ ತರಿಸಿಕೊಂಡರೆ, ಅಥವಾ ಬೇರೆ ಯಾವುದೇ ರೀತಿಯಲ್ಲಿ ನೇರ ಬೋಧಿ ಟ್ರಸ್ಟ್ ನಿಂದ ತರಿಸಿಕೊಂಡರೆ ಅನುಕೂಲ. ಅನೇಕ ಪುಸ್ತಕ ವ್ಯಾಪಾರಿಗಳಲ್ಲಿ ನಮ್ಮ ಪುಸ್ತಕ ಸಿಕ್ಕಲಾರದು. ಅತ್ರಿಯ ಅಶೋಕವರ್ಧನರಂತೆ ಪ್ರಾಮಾಣಿಕವಾಗಿ ವ್ಯವಹರಿಸುವವರು ಕಮ್ಮಿ ಜನ. ಹೀಗಾಗಿ ಪುಸ್ತಕ ವ್ಯಾಪಾರಿಗಳಿಗೆ ಪುಸ್ತಕ ಕಳಿಸುವ ಮೊದಲು ಜಾಗ್ರತೆ ವಹಿಸಬೇಕಾಗುತ್ತದೆ. ನೇರ ನಮ್ಮಿಂದ ತರಿಸಿಕೊಂಡರೆ ಕೊಳ್ಳುಗರಿಗೆ ಶೇಕಡಾ 25 ಕಮಿಶನ್ ಕೂಡಾ ಸಿಕ್ಕುತ್ತದೆ. ಒಂದು ಎಸ್ಸೆಮ್ಮೆಸ್ ಮೆಸ್ಸೇಜ್ ಅಥವಾ ಇಮೇಲಿನಲ್ಲಿ ಪುಸ್ತಕಕ್ಕೆ ಆರ್ಡರ್ ಮಾಡಬಹುದು. ಮೊಬೈಲ್ ನಂಬರ್: 9482622589. ಕಾರ್ಡ್ ಬರೆದರೂ ಪುಸ್ತಕ ಕಳಿಸುತ್ತೇವೆ. ಹಣ ಆ ಮೇಲೆ ಕಳಿಸಬಹುದು. ಕಾಂಪ್ಲಿಮೆಂಟರಿ ಕಾಪಿ ಕೊಡುವುದಿಲ್ಲ.

ಇರಲಿ. ಇನ್ನು ಮುಂದೆ ನಿಯತವಾಗಿ ಬ್ಲಾಗು ಬರೆಯುತ್ತಿರಬೇಕೆಂದು ನಿರ್ಧರಿಸಿದ್ದೇನೆ. ವಾರಕ್ಕೊಮ್ಮೆ ಬರೆಯಬೇಕೆಂದು ನನ್ನ ಆಸೆ. ನೋಡಬೇಕು.

-----------------------------------------



No comments:

Post a Comment