Thursday, March 21, 2013

ಹುಟ್ಟುಹಬ್ಬದ ಪುಸ್ತಕ



ಮೇಲಿನದ್ದು ನನ್ನ ಹೊಸ ಪುಸ್ತಕ. ಇದರ ಪ್ರಕಾಶಕರು ಮಿತ್ರ ಶಿವಾನಂದ ಗಾಳಿ. ಇವತ್ತಿನ ನನ್ನ ಹುಟ್ಟು ಹಬ್ಬದ ಪ್ರಯುಕ್ತ ಇದನ್ನು ಉಡುಗೊರೆ ಎಂದು ಪ್ರಕಟಿಸಿ ಪ್ರತಿ ಕಳಿಸಿದ್ದಾರೆ. ನನ್ನ ಮೇಲಿನ ಅವರ ಪ್ರೀತಿಗೆ ಮನಸ್ಸು ತುಂಬಿಬಂದಿದೆ. ಅವರಿಗೆ, ಅವರ ಬಳಗಕ್ಕೆ ಕೃತಜ್ಞ ಎಂದಷ್ಟೇ ಹೇಳಬಲ್ಲೆ.

ಪೀಟರ್ ಬ್ರೂಗೆಲ್ ನ ಇಕಾರಸ್ ಪೇಂಟಿಂಗ್ ಇರುವ ಈ ಮುಖಪುಟದ ವಿನ್ಯಾಸ ಖ್ಯಾತ ಕಲಾವಿದ ಜಾನ್ ಚಂದ್ರನ್ ಅವರದ್ದು.

ಇದರಲ್ಲಿ ಉಪನಿಷತ್ತುಗಳು, ಪಂಪ, ಕನಕದಾಸ, ಶಾಂತಿನಾಥ ದೇಸಾಯಿ, ಮುಳಿಯ ತಿಮ್ಮಪ್ಪಯ್ಯ, ಚಿದಾನಂದಮೂರ್ತಿ, ಭೈರಪ್ಪ, ಯರ್ಮುಂಜ ರಾಮಚಂದ್ರ ಮೊದಲಾದವರ ಮೇಲೆ ಲೇಖನಗಳಿವೆ. 188 ಪುಟಗಳು. ಬೆಲೆ ರೂ90.00.

ಪ್ರಕಾಶಕರ ವಿಳಾಸ:

ಸುಂದರ ಪುಸ್ತಕ ಪ್ರಕಾಶನ
79, ಚಂದ್ರಕಿರಣ, ಎರಡನೆಯ ತಿರುವು,
ಎರಡನೆಯ ಮುಖ್ಯ ರಸ್ತೆ, ಶಕ್ತಿ ನಗರ
ಧಾರವಾಡ --580004

2 comments:

  1. ಜನ್ಮದಿನದ ಹಾರೈಕೆಗಳು.ನಿಮ್ಮ ಸ್ನೇಹಿತರು ತೋರಿಸಿರುವ ಜೆಸ್ಟ್ಯರ್ ಪ್ರಶಂಶಾರ್ಹ.ಪುಸ್ತಕ ಓದಲು ಕಾತುರನಾಗಿದ್ದೇನೆ.
    ದೇವರಾಜು.ಬೆಂಗಳೂರು.

    ReplyDelete
    Replies
    1. Thank you. ಪ್ರಕಾಶಕರ ಫೋನ್ ನಂಬರ್: ಡಾ. ಶಿವಾನಂದ ಗಾಳಿ 94485 56458

      Delete