tag:blogger.com,1999:blog-3697529067925700330.post2333377995257068414..comments2023-09-02T07:37:21.268-07:00Comments on Devasahitya: ಯು. ಆರ್. ಅನಂತಮೂರ್ತಿ--3 (ಭೈರಪ್ಪ, ಲಂಕೇಶರಿಗೆ ಸಂಬಂಧಿಸಿ)Ramachandra Devahttp://www.blogger.com/profile/12387819810576373106noreply@blogger.comBlogger1125tag:blogger.com,1999:blog-3697529067925700330.post-11096334318766636082011-07-04T22:17:14.488-07:002011-07-04T22:17:14.488-07:00ಆವರಣದ ವಿಷಯ ಮುಸ್ಲಿಮರ ಜೀವನ ಚಿತ್ರಣ ಅಲ್ಲ. ಸಾರಾ ಅಬುಬಕ್ಕ...ಆವರಣದ ವಿಷಯ ಮುಸ್ಲಿಮರ ಜೀವನ ಚಿತ್ರಣ ಅಲ್ಲ. ಸಾರಾ ಅಬುಬಕ್ಕರ್, ಕಟ್ಪಾಡಿಯವರ ಬರಹ ಅತ್ಮೀಯವಾಗಿರುವುದು ನಿಜವಾದರೂ ಅವರ ಬರಹಗಳು ಅಂಶಿಕ ಮಾತ್ರ. ಆವರಣದಲ್ಲಿರೋ ಮುಸ್ಲಿಂ ಜೀವನ ಚಿತ್ರಣ ಬರೀ ಪುಸ್ತಕದಲ್ಲಿ ಮಾತ್ರ ಓದಬಹುದೋ, ಅಥವಾ ಅದು ಭೈರಪ್ಪನವರ ಕಲ್ಪನೆಯೂ ಇಲ್ಲ ಆ ಥರದ ಮುಸ್ಲಿಮರು ಇಲ್ಲವೇ ಇಲ್ಲ ಎನ್ನುತ್ತಿರಾ? ಲೇಖಕರೆ ಹೇಳುವಂತೆ ಆವರಣದ ವಸ್ತು ಇತಿಹಾಸ ಮತ್ತು ಇತಿಹಾಸಕಾರ. ಆ ವಸ್ತುವನ್ನು ಅವರು ನಿರೂಪಿಸಲು ಪುಸ್ತಕಗಳ (ಗ್ರಂಥಾಲಯಗಳ?) ಸಹಾಯ ಪಡೆದಿರಬಹುದಾದರೂ, ಅವರು ವಿಷಯವನ್ನು ತಿರುಚಲು-ಅಥವಾ ಅವರ ಕೃತಿಯ ಇತಿಹಾಸಕಾರರಂತೆ ಇರುವುದನ್ನು ಮುಚ್ಚಿ ಬೇರೇನನ್ನೋ ಬಿಂಬಿಸಲು ಯತ್ನಿಸಿದ್ದಾರೆಯೇ?<br />ಯಾವುದೋ ಕಾಲದಲ್ಲಿ ಆಗಿರುವುದನ್ನ ಈಗೇಕೆ ಕೆರೆದು ಹುಣ್ಣು ಮಾಡಿಕೊಳ್ಳಬೇಕು ಅನ್ನುವವರು ಬಾಮಿಯಾನ್ ಬುದ್ಧನನ್ನು ಧ್ವಂಸ ಮಾಡಿದ ತಾಲಿಬಾನಿಗಳು ತಮ್ಮನ್ನು ತಾವು ನಿಷ್ಠ ಮುಸ್ಲಿಮರು ಎಂದೇ ಕರೆದುಕೊಳ್ಳುತ್ತಾರೆ ಎನ್ನೋದನ್ನ ಗಮನಿಸಬೇಕು. ಹಾಗೆಯೇ ಇನ್ನೊಬ್ಬ ನಿಷ್ಠ ಮುಸ್ಲಿಮನಾದ ಔರಂಗಜೆಬನೂ ಅದೇ ಬುದ್ಧನನ್ನು ನಾಶಪಡಿಸಲು ಯತ್ನಿಸಿ ವಿಫಲ ನಾಗಿದ್ದ ಎನ್ನುವುದನ್ನೂ ಗಮನಿಸಬೇಕು. ಇದರರ್ಥ ಎಲ್ಲಾ ಮುಸ್ಲಿಮರೂ ವಿಗ್ರಹಭಂಜಕರೆ ಅಂತ ಅಲ್ಲ. ಬಹುಪಾಲು ಮುಸ್ಲಿಮರು ಶಾಂತಿ ಪ್ರಿಯರೂ ಹೌದು. ಅಂಥವರನ್ನೇ ತಾಲಿಬಾನಿಗಳು ಮುಸ್ಲಿಮರಲ್ಲ ಎಂದು ನಿರ್ದಯೆಯಿಂದ ಕೊಲ್ಲುತಿರುವದು.<br />ಎಲ್ಲ ಧರ್ಮಗಳ ಗುರಿ ಒಂದೇ, ಎಲ್ಲ ಧರ್ಮಗಳೂ ಬೋಧಿಸೋದು ಶಾಂತಿಯನ್ನೇ ಎಂದು ಭಾಷಣ ಮಾಡುವವರು ಎಲ್ಲ ಧರ್ಮಗಳಲ್ಲೂ ಕುಂದು ಕೊರತೆ ಹುಳುಕು ಕೊಳಕು ಇವೆ ಎಂದೇಕೆ ಒಪ್ಪಿಕೊಳ್ಳೋದಿಲ್ಲ? ಅವೆಲ್ಲ ಕಾಲಬದ್ಧ ಆಚರಣೆ, ಆ ಕ್ಷಣದ ಸತ್ಯಗಳೂ, ಆಯಾ ವ್ಯಕ್ತಿಗಳ ಅನುಭವ, ಇತರರ್ಗೆ ಬೇರೆಯದೇ ಅನುಭವಗಲಾಗಿರಬಹುದು ಅನ್ನುವುದನ್ನೇಕೆ ಮರೆಯುತ್ತಾರೆ? ಈ ಪ್ರಶ್ನೆಗಳನ್ನ ಆಯಾಯ ಧರ್ಮದವರೇ ಎತ್ತಬೇಕೆ? ಒಂದು ವೇಳೆ ಯಾರೂ ಪ್ರಶ್ನಿಸದಿದ್ದರೆ ಅದೊಂದು ಪರಿಪೂರ್ಣ ಧರ್ಮವೇ?<br />ಭೈರಪ್ಪನವರ ಥಿಯರಿ ಏನು? ಅನ್ವೇಷಣೆ, ದಾಟು,ಜಲಪಾತ,ಸಾರ್ಥ ಇವುಗಳಲ್ಲಿರೋ ಥಿಯರಿ ಏನು?<br />ಆವರಣ ಏಕೆ ಕೆಳಮಟ್ಟದ ಸಾಧನೆ?santoshahttps://www.blogger.com/profile/06387685261764486640noreply@blogger.com